
Unique cultural event Aaj Ami Konkani Ulavyam in Kinnigoli
January 18, 2026
ಸಿರಿಲ್ ಆಲ್ಬರ್ಟ್ ಡಿಸೋಜಾ (81)
February 4, 2026ಕಿನ್ನಿಗೋಳಿ ಹಾಗೂ ಆಸುಪಾಸಿನ ಮಾನಸಿಕ ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಅವರಿಗೆ ವಿದ್ಯಾಭ್ಯಾಸವನ್ನು ನೀಡುವ ಸಲುವಾಗಿ ಪ್ರಾರಂಭವಾದ ವಿದ್ಯಾಸಂಸ್ಥೆ 30 ವರ್ಷಗಳನ್ನು ಪೂರೈಸಿದೆ. ಕಳೆದ ಅನೇಕ ವರ್ಷಗಳಿಂದ ನಮ್ಮ ವಿದ್ಯಾ ಸಂಸ್ಥೆಯಲ್ಲಿ ಕಲಿಯುವಂತಹ ವಿದ್ಯಾರ್ಥಿಗಳಿಗೆ ಉತ್ತಮವಾದ ಶಾಲಾ ವಾಹನವನ್ನು ಒದಗಿಸಬೇಕು ಎನ್ನುವಂತಹ ಕನಸು ನಮ್ಮದಾಗಿತ್ತು. ಇದೇ ಕಾರಣಕ್ಕೆ ಅನೇಕ ಬಾರಿ ದಾನಿಗಳನ್ನು ಹುಡುಕುವ ಪ್ರಯತ್ನ ಮಾಡುತ್ತಲೇ ಇತ್ತು . ಈ ಸಮಯದಲ್ಲಿ ಪ್ರಪ್ರಥಮವಾಗಿ ಶ್ರೀಮಾನ್ ರೂಡೋಲ್ಫ್ ಫೆರ್ನಾಂಡಿಸ್ ಅವರು ಶಾಲಾ ಬಸ್ಸಿಗಾಗಿ ಎರಡು ಲಕ್ಷ 22 ಸಾವಿರದ 222 ರೂಪಾಯಿಗಳನ್ನು ದೇಣಿಗೆ ನೀಡಿದರು. ಇದರಿಂದ ಶಾಲಾ ವಾಹನದ ಕನಸು ಎಲ್ಲರ ಮನಸ್ಸಿನಲ್ಲೂ ಬಲವಾಗಿ ಚಿಗುರು ಒಡೆದು ಹೆಮ್ಮರವಾಯಿತು. ಅನೇಕ ವರ್ಷಗಳ ಆಸೆ ಪ್ರಾರ್ಥನೆ ಪರಿಶ್ರಮ ಇವೆಲ್ಲದಕ್ಕೂ ಪ್ರತಿಫಲವಾಗಿ ಈ ವರ್ಷ ಶ್ರೀಮಾನ್ ಲಿಯೋ ಮಸ್ಕರೆನ್ಹಸ್ ಇವರ ನೇತೃತ್ವದಲ್ಲಿ ಲೂಸಿ ಮಸ್ಕರೆನ್ಹಸ್ ಮತ್ತು ರೋಕಿ ಮಸ್ಕರೆನ್ಹಸ್ ಇವರ ಆಶಯ ಮತ್ತು ಸಹಕಾರದೊಂದಿಗೆ ನಮ್ಮ ವಿದ್ಯಾರ್ಥಿಗಳಿಗೆ ಹೊಸ ಶಾಲಾ ವಾಹನವನ್ನು ನಮ್ಮ ವಿದ್ಯಾ ಸಂಸ್ಥೆಗೆ ಹತ್ತಾಂತರಿಸಲಾಯಿತು. ಈ ಶುಭದಿನದ ಶುಭ ಮುಂಜಾನೆ ಈ ಶಾಲಾ ವಾಹನಕ್ಕೆ ವಂ. ಫಾ. ಜೋಕಿಮ್ ಫರ್ನಾಂಡಿಸ್ ಶುಭ ಆಶೀರ್ವಚನವನ್ನು ನೀಡಿ ಉದ್ಘಾಟನೆಯನ್ನು ಸಮಸ್ತ ವಿದ್ಯಾರ್ಥಿಗಳು ಶಿಕ್ಷಕ ಮತ್ತು ಶಿಕ್ಷಕಿತರ ವರ್ಗ ಶಾಲಾ ಆಡಳಿತ ವರ್ಗದ ಮತ್ತು ಪೋಷಕರ ಸಮ್ಮುಖದಲ್ಲಿನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ವಂ. ಫಾ.ಜೋಕಿಮ್ ಫರ್ನಾಂಡಿಸ್, ಶಾಲಾವಾಹನವನ್ನು ಒದಗಿಸಿದಂತಹ ಲಿಯೋ ಮಸ್ಕರೆನ್ಹಸ್, ಲೂಸಿ ಮಸ್ಕರೆನ್ಹಸ್ ಮತ್ತು ರೋಕಿ ಮಸ್ಕರೆನ್ಹಸ್, ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ರೇಷ್ಮಾ ಮರಿಯಾ ಮಾರ್ಟಿಸ್, ಕಿನ್ನಿಗೋಳಿ ಚರ್ಚಿನ ಉಪಾಧ್ಯಕ್ಷರಾದ ನವೀನ್ ಡಿಸೋಜಾ, ಶಾಲಾಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಶೈಲ ಸಿಕ್ವೇರಾ ಇವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಮುಖ್ಯ ಅತಿಥಿಗಳ ಶುಭ ಹಾರೈಕೆ ಗಳೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮವನ್ನು ಮಿಷಲ್ ಲೋಬೊ ಇವರು ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿಯವರು ಅತಿಥಿ ಅಭ್ಯಾಗತರನ್ನ ಸ್ವಾಗತಿಸಿದರು. ಜೊವಿಟ ಸುಝಿಯಾ ಸೀಕ್ವೆರ ಇವರು ಎಲ್ಲಾ ಗಣ್ಯರಿಗೂ ವಂದನಾಪಣೆಯನ್ನ ಮಾಡಿದರು.













